ಗುರುಸ್ತೋತ್ರ

Submitted by ಸುಧೀಂದ್ರ on ಶನಿ, 11/19/2022 - 14:04

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ|
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ‖ 1 ‖

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ‖ 2 ‖

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀಗುರವೇ ನಮಃ ‖ 3 ‖

ಸ್ಥಾವರಂ ಜಂಗಮಂ ವ್ಯಾಪ್ತಂ ಯತ್ಕಿಂಚಿತ್ಸಚರಾಚರಂ|
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ‖ 4 ‖

ಚಿನ್ಮಯಂ ವ್ಯಾಪಿಯತ್ಸರ್ವಂ ತ್ರೈಲೋಕ್ಯಂ ಸಚರಾಚರಂ|
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ‖ 5 ‖

ರಾಮ ನಾಮ ತಾರಕಮ್

Submitted by ಸುಧೀಂದ್ರ on ಮಂಗಳ, 04/20/2021 - 20:30

ರಾಮ ರಾಮ ರಾಮ ರಾಮ ರಾಮ ನಾಮ ತಾರಕಮ್|
ರಾಮ ಕೃಷ್ಣ ವಾಸುದೇವ ಭಕ್ತಿ ಮುಕ್ತಿ ದಾಯಕಮ್||

ಜಾನಕಿ ಮನೋಹರಂ ಸರ್ವ-ಲೋಕ ನಾಯಕಮ್|
ಶಂಕರಾದಿ ಸೇವ್ಯ-ಮಾನ ಪುಣ್ಯನಾಮ ಕೀರ್ತನಮ್||

ಜಾನಕಿ ಮನೋಹರಂ ಸರ್ವ-ಲೋಕ ನಾಯಕಮ್|
ಶಂಕರಾದಿ ಸೇವ್ಯ-ಮಾನ ದಿವ್ಯ ನಾಮ ಕೀರ್ತನಮ್||

ವೀರಶೂರ ವಂದಿತಂ ರಾವಣಾದಿ ನಾಶಕಮ್|
ಆಂಜನೇಯ ಜೀವನಾಮ ರಾಜಮಂತ್ರ ರೂಪಕಮ್||

 

 

ಶ್ರೀ ಸೂರ್ಯಾಷ್ಟಕಮ್‌

Submitted by ಸುಧೀಂದ್ರ on ಶನಿ, 03/06/2021 - 10:05

ಸೂರ್ಯ ರಥ

ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ: |
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಸ್ತುತೇ || ೧ ||

ಸಪ್ತಾಶ್ವ ರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ‌ |
ಶ್ವೇತಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೨ ||

ಲೋಹಿತಂ ರಥಮಾರೂಢಂ ಸರ್ವಲೋಕಪಿತಾಮಹಂ‌ |
ಮಹಾಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೩ ||

ತ್ರೈಗುಣ್ಯಂಚ ಮಹಾಶೂರಂ ಬ್ರಹ್ಮವಿಷ್ಣುಮಹೇಶ್ವರಂ‌ |
ಮಹಾಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೪ ||

ಭಗವದ್ಗೀತೆಯ ಮಂಗಲ ಶ್ಲೋಕ

ಕಾಲೇ ವರ್ಷತು ಪರ್ಜನ್ಯ:
ಪೃಥಿವೀ ಸಸ್ಯ ಶಾಲಿನೀ|
ದೇಶೋಯಂ ಕ್ಷೋಭ ರಹಿತ:
ಸಜ್ಜನಾ ಸಂತು ನಿರ್ಭಯಾ:||

 

ಲಿಂಗನಮಕ್ಕಿ ಜಲಾಶಯದ ನೀರು

ಸರಿಯಾದ ಕಾಲಕ್ಕೆ ಮಳೆ ಸುರಿದು ಈ ಭೂಮಿ ಸದಾ ಹಸಿರಿನಿಂದ ಕಂಗೊಳಿಸಿ ಸಮೃದ್ಧವಾಗಿರಲಿ. ದೇಶದೆಲ್ಲೆಡೆ ಯಾವುದೇ ತೊಂದರೆಗಳಿಲ್ಲದೆ, ಮತ್ತು ಸಜ್ಜನರು ಯಾವುದೇ ಭಯವಿಲ್ಲದೆ ಸುಖ ಶಾಂತಿಯಿಂದ ಇರುವಂತಾಗಲಿ.

ಆಧುನಿಕತೆ ಅಂದರೆ ಪಾಶ್ಚಿಮಾತ್ಯೀಕರಣವೇ?

Submitted by ಸುಧೀಂದ್ರ on ಭಾನು, 04/12/2020 - 20:47

ಭಾರತಮಾತೆ

ಭಾರತಕ್ಕೆ ಮೊಘಲರನ್ನೂ, ಬ್ರಿಟಿಷ್ ‌ರನ್ನೂ ಬಿಟ್ಟು ಇತಿಹಾಸವಿದೆ ಎಂಬುದನ್ನು ಮರೆಯದಿರೋಣ.

ನಗರೀಕರಣದಿಂದ ಗ್ರಾಮಸ್ವರಾಜ್ಯದ ಕಡೆಗೆ

Submitted by ಸುಧೀಂದ್ರ on ಭಾನು, 07/21/2019 - 00:00

ಶರಾವತಿಯ ಮತ್ತು ಮಲೆನಾಡಿನ ಉಳಿವಿಗಾಗಿ ಹೋರಾಟದ ಲಕ್ಷ್ಯದಲ್ಲಿರುವ, ನಗರ ಮತ್ತು ಮಲೆನಾಡು ನಡುವೆ ಕುಡಿಯುವ ನೀರು ಸಂಘರ್ಷವಾಗಿರುವ ಈ ಸಮಯದಲ್ಲಿ, ಇಂತಹ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ಒಂದು ಸಣ್ಣ ಅವಲೋಕನ ಮಾಡಿಕೊಳ್ಳೊಣ.

 

ಚನ್ನೆ ಮಣೆ ( ಅಳಿಗುಳಿಮನೆ)

Submitted by ಸುಧೀಂದ್ರ on ಶನಿ, 02/04/2017 - 13:44

ಚನ್ನೆ ಮಣೆ ಎಲ್ಲರ ಮನೆಯಲ್ಲೂ ಇದ್ದ ಕಾಲ ಇತ್ತು.  ಗ್ರಾಮೀಣ ಆಟ. ಮರದಿಂದ ತಯಾರಿಸಿದ ಮಣೆಯಲ್ಲಿ ಎರಡು ಸಾಲುಗಳಲ್ಲಿ ತಲಾ ಏಳು ಕುಳಿಗಳಲ್ಲಿ ಚನ್ನೆ ಕಾಯಿ ಅಥವಾ ಹುಣಸೆ ಬೀಜಗಳನ್ನು ಉಪಯೋಗಿಸಿ ಇದನ್ನು ಆಡಲಾಗುತ್ತದೆ. ಎಲ್ಲಾ ವಯೋಮಾನದವರಿಗೂ ಇಷ್ಟವಾದ ಆಟ. ಒಂದು ಮಣೆಯಲ್ಲಿ ಇಬ್ಬರು ಆಡಬಹುದು. ಮೊದಲಿಗೆ ಪ್ರತಿ ಕುಳಿಯಲ್ಲೂ ೪ ಕಾಯಿಗಳನ್ನು ಹಾಕಬೇಕು. ಇಬ್ಬರೂ ಆಟಗಾರರೂ ಒಂದೊಂದು ಸಾಲನ್ನು ಆರಿಸಿಕೊಳ್ಳಬೇಕು. ತಮ್ಮ ಸಾಲಿಗೆ ಸೇರಿದ ಯಾವುದಾದರೊಂದು ಕುಳಿಯಿಂದ ಕಾಯಿಗಳನ್ನು ತೆಗೆದು, ಒಂದೊಂದಾಗಿ ಮುಂದಿನ ಕುಳಿಗಳಲ್ಲಿ ಹಾಕಬೇಕು. ಕೈಯಲಿದ್ದ ಕಾಯಿಗಳು ಖಾಲಿಯಾದಲ್ಲಿ ನಂತರದ ಕುಳಿಯಿಂದ ಮತ್ತೆ ಕಾಯಿಗಳನ್ನು ತೆಗೆದು, ಮುಂದಿನ ಕುಳಿಗಳಿಗೆ ಹಾಕಬೇಕು.

ಜೋಗಿ - ತಂಬೂರಿ

Submitted by devaru.rbhat on ಧ, 01/11/2017 - 17:59

ಸುಮಾರಾಗಿ ಆನವಟ್ಟಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಾಗಿರುವ ಜೋಗಿ ಜನಾಂಗದವರು ಜೋಗೇರಾಟ ಎನ್ನುವ ವಿಶಿಷ್ಟ ಜಾನಪದ ಕಲೆಯನ್ನು ಪ್ರದರ್ಶನ ನೀಡುವುದು ಸಾಮಾನ್ಯ.  ಇವರು ಮೂಲತಃ ಕೃಷಿಕರು/ ಕೃಷಿ ಕಾರ್ಮಿಕರು.  ದೀಪಾವಳಿಯ ನಂತರ ತಮ್ಮ ಸುಗ್ಗಿ ಕೆಲಸಗಳನ್ನು ಪೂರೈಸಿದ ನಂತರ ತಮ್ಮದೇ ಆದ ವಿಶಿಷ್ಟವಾದ್ಯ ಪರಿಕರ (ಏಕತಾರಿ/ ಏಕನಾರಿ/ ತಂಬೂರಿ ಬುರುಡೆ)ವನ್ನು ತೆಗೆದುಕೊಂಡು ಊರೂರು ಸುತ್ತಿ ದಾಸರ ಪದವೇ ಮೊದಲಾದ ದೇವರ ನಾಮಗಳನ್ನು ಗೆಜ್ಜೆಯ ನಾದ ಬೀರುವ ಹೆಬ್ಬೆರಳಲ್ಲಿ ಸಿಕ್ಕಿಸಿಕೊಳ್ಳಬಹುದಾದ ಉಂಗುರವನ್ನು ಹಿಡಿದು ಏಕತಾರಿಯ ನಾದಕ್ಕೆ ಶೃತಿ ಸೇರಿಸಿ ಹಾಡುತ್ತಾ ಬರುತ್ತಾರೆ.  ಇವರಿಗೆ ರೈತಾಪಿ ವರ್ಗದವರು ತಮ್ಮಲ್ಲಿ ಬೆಳೆದ ಧವಸ ಧಾನ್ಯ,ಅಡಿಕೆ ಯನ್ನು ಸಂಭಾವನೆಯಾಗಿ ನೀಡುತ್ತಾರೆ.  ಮೊದಲು ಇಬ್ಬರು ಒಟ್ಟೊಟ್ಟಿಗೆ ಬರುತ್ತಿದ್ದರು ಈಗ ಬದಲಾದ ದಿನ

ಸಮಾವರ್ತನ - ಕಾಶೀ ಯಾತ್ರೆ

Submitted by ಪಾರ್ವತಿ ಗಣಪತಿ ಹೆಗಡೆ on ಭಾನು, 03/01/2015 - 21:24

ಷೋಡಶ ಸಂಸ್ಕಾರಗಳಲ್ಲಿ ಹನ್ನೆರಡನೆಯದಾದ ಸಮಾವರ್ತನ ವಿದ್ಯಾರ್ಥಿ ಜೀವನದ ಮುಕ್ತಾಯವನ್ನು ಗುರುತಿಸುತ್ತದೆ. ಅಂದರೆ, ಬ್ರಹ್ಮಚರ್ಯ ಅವಧಿಯನ್ನು ಪೂರ್ತಿಗೊಳಿಸಿ ಮತ್ತು ಗೃಹಸ್ಥಾಶ್ರಮವನ್ನು ಪ್ರವೇಶಿಸಲು ಗುರುವಿನ ಅಪ್ಪಣೆ ಕೋರುವ ಸಮಯ.